ಅಮೃತ ಸರೋವರ ಆವರಣದಲ್ಲಿ ಪಂಚ ಪ್ರಾಣ ಪ್ರತಿಜ್ಞೆ ವಿಶೇಷ” 77ನೇ ಸ್ವಾತಂತ್ರ್ಯ ದಿನಾಚರಣೆ.
ವಿಜಯ ದರ್ಪಣ ನ್ಯೂಸ್ ಪಿರಿಯಾಪಟ್ಟಣ, ಮೈಸೂರು ಜಿಲ್ಲೆ.ಆಗಸ್ಟ್ 15 ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ ಪೂರ್ಣಗೊಂಡಿರುವ ಅಮೃತ ಸರೋವರ ಕೆರೆ, ಗ್ರಾಮ ಪಂಚಾಯಿತಿ ಆವರಣ ಹಾಗೂ ಶಾಲಾ ಆವರಣದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಸಲುವಾಗಿ ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ನಿರ್ಮಿಸಲಾಗಿರುವ ಶಿಲಾ ಫಲಕದ ಸ್ಥಳಗಳಲ್ಲಿ ವಿಶೇಷವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು. ಪ್ರಮುಖವಾಗಿ ಪೂರ್ಣಗೊಂಡಿರುವ ಬೆಟ್ಟದತುಂಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಡುಕೂರು ಗ್ರಾಮದ ಹೊಸಕೆರೆ, ಅಮೃತ ಸರೋವರದ ಆವರಣದಲ್ಲಿ ಗ್ರಾಮ ಪಂಚಾಯತಿ…