ಟಿವಿ ಕ್ಯಾಮರಾಮೆನ್ ಆಗಿದ್ದ ಹಣಮಂತ ಇದ್ದದ್ದು ಗಲ್ಲಿಯೊಂದರ ತಗಡಿನ ಮನೆಯಲ್ಲಿ: ರಾಜ್ಯಾಧ್ಯಕ್ಷ ಶಿವಾನಂದ ತಗಡೂರು
ವಿಜಯ ದರ್ಪಣ ನ್ಯೂಸ್ ಬೆಂಗಳೂರು ಟಿವಿ ಕ್ಯಾಮರಾಮೆನ್ ಆಗಿದ್ದ ಹಣಮಂತ ಇದ್ದದ್ದು ಗಲ್ಲಿಯೊಂದರ ತಗಡಿನ ಮನೆಯಲ್ಲಿ… ಯಾರ ಬದುಕು ಯಾವಾಗ ಬೀದಿಗೆ ಬಂದು ನಿಲ್ಲುತ್ತದೆಯೋ ಗೊತ್ತಿಲ್ಲ… ಒಂದು ದಶಕಕ್ಕೂ ಹೆಚ್ಚು ಕಾಲ ಟಿವಿ ಕ್ಯಾಮರಾಮೆನ್ ಆಗಿ ಕೆಲಸ ಮಾಡಿದ್ದ ಹಣಮಂತ ಬಬಲಾದಿ (ಸುವರ್ಣ ಟಿವಿ, ಕಸ್ತೂರಿ ಟಿವಿ)ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ಬದುಕುಳಿದು ಬರಲಿ ಎಂದೇ ಸುದ್ದಿಮನೆಯ ಗೆಳೆಯರು ಪ್ರಾರ್ಥಿಸಿದ್ದರು. ವಿಧಿಯಾಟ ಆತ ಬದುಕಲಿಲ್ಲ. ಆಸ್ಪತ್ರೆಗಾಗಿ ಕೂಡಿಟ್ಟ ಹಣವನ್ನು ಆ ಕುಟುಂಬ ಖರ್ಚು ಮಾಡಿಕೊಂಡಿತು. ಮನೆಯಲ್ಲಿ ಇವ ಬಿಟ್ಟರೆ…