ಪ್ರಹರ್ ಜನಶಕ್ತಿ ಪಕ್ಷ ಪಿ ಜೆ ಪಿ ಕರ್ನಟಕ ರಾಜ್ಯ ಘಟಕ ಕಚೇರಿ ಉದ್ಘಾಟನೆ.

ವಿಜಯ ದರ್ಪಣ ನ್ಯೂಸ್ ಕಲ್ಬುರ್ಗಿ ಜನವರಿ 05:ಪ್ರಹರ್ ಜನಶಕ್ತಿ ಪಕ್ಷ ಪಿ ಜೆ ಪಿ ಕರ್ನಟಕ ರಾಜ್ಯ ಘಟಕ ವತಿಯಿಂದ ಇತ್ತೀಚೆಗೆ ಶುಕ್ರವಾರ ರಾಜ್ಯಧ್ಯಕ್ಷ ಶ್ರೀ ಪ್ರವೀಣ್ ಚೌಧರಿ ಅವರು ಕಲ್ಬುರ್ಗಿ ನಗರ ಜಿಲ್ಲೆಯ ಹೃದಯ ಭಾಗವಾದ ಸೂಪರ್ ಮಾರ್ಕೆಟ್ ಹತ್ತಿರ ನೂತನ ಪಕ್ಷದ ಕಚೇರಿ ಉದ್ಘಾಟನೆ ಮಾಡಿದರು. ಗುರುಬಸವೇಶ್ವರ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಬಾಬು ಜಗಜೀವನ್ ರಾಮ್ ನವರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು. ಪ್ರಹರ ಜನಶಕ್ತಿ ಪಕ್ಷದ ಉಪಾಧ್ಯಕ್ಷ ವೆಂಕಟೇಶ್ ಜಿ…

Read More

ಕನ್ನಡಿಗನ ಅದ್ಭುತ ಸಾಧನೆ: ತೈಲ ವರ್ಣ ಚಿತ್ರಗಳ ಮೂಲಕ ಪೌರಾಣಿಕ ಕಥೆಗಳ ಅನಾವರಣ.

ವಿಜಯ ದರ್ಪಣ ನ್ಯೂಸ್ ಬೆಂಗಳೂರು, ಜನವರಿ 5, 2024: ಭಾರತೀಯ ಪುರಾಣಗಳ ಶ್ರೀಮಂತ ಇತಿಹಾಸದಲ್ಲಿ ಮಹಾಭಾರತವು ಸದಾ ಪ್ರಸ್ತುತವಾಗಿರುವ ಮಹಾಕಾವ್ಯವಾಗಿದೆ. ಮಹಾಭಾರತವು ಕುರುವಂಶದ ಕಥೆ, ಕುರುಕ್ಷೇತ್ರ ಯುದ್ಧದಲ್ಲಿ ಕೌರವರು ಮತ್ತು ಪಾಂಡವರ ನಡುವಿನ ಧರ್ಮಯುದ್ಧದ ಕತೆಯನ್ನು ಮಹಾಭಾರತ ನವಿರಾಗಿ ಹೇಳುತ್ತದೆ. ಶೌರ್ಯ, ನೈತಿಕತೆ ಮತ್ತು ಬ್ರಹ್ಮಾಂಡದ ಸಮತೋಲನವೇ ಮಹಾಭಾರತದ ಮೂಲತಿರುಳಾಗಿದೆ. ಶ್ರೀ ಸ್ವಾಮಿ ಸಿ.ಜೆ ಅವರ ಮಹಾಭಾರತ ಸರಣಿಯು ಕೇವಲ ತೈಲ ವರ್ಣ ಚಿತ್ರಗಳ ಸಂಗ್ರಹವಲ್ಲ, ಬದಲಿಗೆ ಕಾಲಾತೀತವಾದ ಸಾಹಸಗಾಥೆಯ ಸೊಗಸಾದ ನಿರೂಪಣೆಯಾಗಿದೆ. ಶ್ರೀ ಸ್ವಾಮಿ ಅವರು…

Read More

ಮತ್ತೆ ಬಿಗ್ ಬಾಸ್ ಸುದ್ದಿ……..

ವಿಜಯ ದರ್ಪಣ ನ್ಯೂಸ್ ಮತ್ತೆ ಬಿಗ್ ಬಾಸ್ ಸುದ್ದಿ…….. ಸುಮಾರು ‌72 ಲಕ್ಷ ಜನರು ಒಬ್ಬ ಬಿಗ್ ಬಾಸ್ ಸ್ಪರ್ಧಿಯ ಪರವಾಗಿ ಮೊಬೈಲ್ ಆಪ್ ಮ‌ೂಲಕ ತಮ್ಮ ಬೆಂಬಲ ಸೂಚಿಸಿದ್ದಾರೆ ಎಂದು ಜನಪ್ರಿಯ ಬಿಗ್ ಬಾಸ್ ನಿರೂಪಕ ನಟ ಸುದೀಪ್ ಹೇಳಿದ್ದಾರೆ. ಉಳಿದ ಸ್ಪರ್ಧಿಗಳ ಬೆಂಬಲ ಎಲ್ಲವನ್ನೂ ಒಟ್ಟು ಮಾಡಿದರೆ ಸುಮಾರು ಒಂದು ಕೋಟಿ ಆಗಬಹುದು. ಅವರ ಮಾತುಗಳು ಸತ್ಯ ಇರಬಹುದು ಎಂಬ ಭರವಸೆಯೊಂದಿಗೆ,… ಕರ್ನಾಟಕದ ಒಟ್ಟು ಜನಸಂಖ್ಯೆ ಸುಮಾರು 7 ಕೋಟಿ. ಅದರಲ್ಲಿ ಮತದಾರರ ಸಂಖ್ಯೆ…

Read More

ಸ್ಥಿರತೆಯ ಬೀಜ ಬಿತ್ತಿ ಗೆಲುವಿನ ಹೂನಗೆ ಚೆಲ್ಲಿ….

ವಿಜಯ ದರ್ಪಣ ನ್ಯೂಸ್.. ಸ್ಥಿರತೆಯ ಬೀಜ ಬಿತ್ತಿ ಗೆಲುವಿನ ಹೂನಗೆ ಚೆಲ್ಲ… ಜಯ್ ನುಡಿ. ಜಯಶ್ರೀ.ಜೆ. ಅಬ್ಬಿಗೇರಿ,                      ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೊ.೯೪೪೯೨೩೪೧೪೨ ಜೀವನವೆನ್ನುವುದು ಏರಿಳಿತಗಳಿಂದ ಕೂಡಿದೆ. ಅದು ಹೀಗೆ ಇರುತ್ತದೆ ಹೀಗೇ ಸಾಗುತ್ತದೆಂದು ಖಚಿತವಾಗಿ ಹೇಳಲು ಆಗುವುದಿಲ್ಲ. ಹೀಗಿದ್ದಾಗ್ಯೂ ಕೆಲವರು ಮಾತ್ರ ಏರಿಳಿತಗಳನ್ನು ಲೆಕ್ಕಿಸದೇ ತಾವು ಅಂದುಕೊಂಡಂತೆ ಗೆಲುವನ್ನು ದಾಖಲಿಸಿಯೇ ಬಿಡುತ್ತಾರೆ. ಒಮ್ಮೆಲೇ ಭರ‍್ರನೇ ಬೀಸುವ ಬಿರುಗಾಳಿಯಾಗಲಿ, ಮನಸ್ಸಿಗೆ ಮುದನೀಡುವ ತಂಗಾಳಿಯಾಗಲಿ…

Read More

75ನೇ ಗಣರಾಜ್ಯೋತ್ಸವದ ದಿನಾಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಶಿವಶಂಕರ ಸೂಚನೆ

ವಿಜಯ ದರ್ಪಣ ನ್ಯೂಸ್. ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜನವರಿ 03 :- 2024 ರ ಜನವರಿ 26 ರಂದು 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಶಿವಶಂಕರ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಅವರು ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ “75ನೇ ಗಣರಾಜ್ಯೋತ್ಸವದ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ…

Read More

ಶ್ರೀರಾಮ…….

ವಿಜಯ ದರ್ಪಣ ನ್ಯೂಸ್ ಮಹಾತ್ಮ ಗಾಂಧಿಯವರ ಶ್ರೀರಾಮ ಮತ್ತು ರಾಮರಾಜ್ಯ, ಬಾಬಾ ಸಾಹೇಬರ ಶ್ರೀರಾಮ ಮತ್ತು ಭೀಮ ರಾಜ್ಯ, ವಾಲ್ಮೀಕಿಯವರ ರಾಮಾಯಣದ ಶ್ರೀರಾಮ, ಸ್ವಾಮಿ ವಿವೇಕಾನಂದರ ಭಾರತದ ಸಾಂಸ್ಕೃತಿಕ ಶ್ರೀರಾಮ,ದ್ರಾವಿಡ ಚಳವಳಿಯ ಪೆರಿಯಾರ್ ರಾಮಸ್ವಾಮಿಯವರ ಪೌರಾಣಿಕ ಶ್ರೀರಾಮ, ರಾಜಕೀಯ ಪಕ್ಷಗಳ‌ ಶ್ರೀರಾಮ, ಮುಸ್ಲಿಮರ ಶ್ರೀರಾಮ, ( ಅಯೋಧ್ಯೆ ಬಾಬರಿ ಮಸೀದಿ ಧ್ವಂಸದ ನಂತರ ಅವರಲ್ಲಿ ರಾಮರ ಬಗೆಗಿನ ಅಭಿಪ್ರಾಯ ) ಅಯೋಧ್ಯೆಯ ಈಗಿನ ಶ್ರೀರಾಮ, ಜನಸಾಮಾನ್ಯರ ಮನಸ್ಸಿನ ಶ್ರೀರಾಮ….. ಈ ಶ್ರೀರಾಮ ಐತಿಹಾಸಿಕ ಪುರುಷರೇ ಅಥವಾ ಪೌರಾಣಿಕ…

Read More

ಟಿವಿ ವಾಹಿನಿಗಳಲ್ಲಿ ಆಕ್ಷೇಪಾರ್ಹ ಕಾರ್ಯಕ್ರಮಗಳು ಪ್ರಸಾರವಾದರೆ ದೂರು ಸಲ್ಲಿಸಿ: ಜಿಲ್ಲಾ ವಾರ್ತಾ ಇಲಾಖೆ.

ವಿಜಯ ದರ್ಪಣ ನ್ಯೂಸ್. ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜನವರಿ 03 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವತಿಯಿಂದ ಕೇಬಲ್ ಟಿವಿ ಹಾಗೂ ಉಪಗ್ರಹ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ದೂರುಗಳಿದ್ದಲ್ಲಿ ದೂರು ದಾಖಲಿಸಲು 24×7 ದೂರು ಕೋಶ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಕೇಬಲ್ ಟೆಲಿವಿಷನ್ ನೆಟ್ವರ್ಕ್ (ರೆಗ್ಯುಲೇಶನ್) ಆಕ್ಟ್ 1995 ರ ಪರಿಚ್ಛೇದ 6 ಕಾರ್ಯಕ್ರಮ ಸಮಿತಿಯಂತೆ ಸೇವೆಯಲ್ಲಿ ಪ್ರಸಾರವಾಗುವ ಯಾವುದೇ ಕಾರ್ಯಕ್ರಮವು ಸದಭಿರುಚಿ ಅಥವಾ ಸಭ್ಯತೆ…

Read More

ಅಸ್ಸಾಂನಲ್ಲಿ ಶಾಶ್ವತ ಶಾಂತಿ ಮತ್ತು ಸರ್ವತೋಮುಖ ಅಭಿವೃದ್ಧಿಯೆಡೆಗೆ ಮಹತ್ವದ ಹೆಜ್ಜೆ: ಅಮಿತ್ ಶಾ

ವಿಜಯ ದರ್ಪಣ ನ್ಯೂಸ್ ಬಂಡುಕೋರ ಉಲ್ಫಾ ಸಂಘಟನೆಯ ಜೊತೆಗಿನ ಐತಿಹಾಸಿಕ ಒಪ್ಪಂದವನ್ನು ಶ್ಲಾಘಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದು ಅಸ್ಸಾಂನಲ್ಲಿ ಶಾಶ್ವತ ಶಾಂತಿ ಮತ್ತು ಸಮಗ್ರ ಅಭಿವೃದ್ಧಿಯನ್ನು ಸಾಧಿಸುವ ಮಹತ್ವದ ಕ್ರಮಗಳಲ್ಲಿ ಒಂದಾಗಿದೆ ಎಂದರು. ಕೇಂದ್ರ ಸರ್ಕಾರ, ಅಸ್ಸಾಂ ರಾಜ್ಯ ಸರ್ಕಾರ ಮತ್ತು ಉಲ್ಫಾವನ್ನು (Uಐಈಂ) ಒಳಗೊಂಡಿರುವ ತ್ರಿಪಕ್ಷೀಯ ಒಪ್ಪಂದವು ಈ ಪ್ರದೇಶದಲ್ಲಿ ದಶಕಗಳ ಕಾಲದಿಂದಿದ್ದ ಹಿಂಸಾಚಾರದ ಅಂತ್ಯವನ್ನು ಸೂಚಿಸುವುದರ ಜೊತೆಗೆ ಅಸ್ಸಾಂನಲ್ಲಿ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ…

Read More

ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣ ದಿನಾಚರಣೆ.

ವಿಜಯ ದರ್ಪಣ ನ್ಯೂಸ್  ವಿಜಯಪುರ ದೇವನಹಳ್ಳಿ ತಾಲ್ಲೂಕು ಜನವರಿ:ನಾಡಿನ ಐತಿಹಾಸಿಕ ವಾಸ್ತುಶಿಲ್ಪ ಪರಂಪರೆಗೆ ಶಿಲ್ಪಿಗಳ ಕೊಡುಗೆ ಅಪಾರವಾದದ್ದು , ಅಂತಹ ಅಪರೂಪದ ಕೊಡುಗೆಯನ್ನು ನಾಡಿಗೆ ನೀಡಿ ತನ್ನ ಕಲಾ ಕೌಶಲ್ಯ ಕೊಡುಗೆಯನ್ನು ನಾಡಿಗೆ ನೀಡಿದ ಅಜರಾಮನಾರದ ಜಕಣಾಚಾರಿ ಎಂದು ಸಂಘದ ಅಧ್ಯಕ್ಷ ಎ. ಸುದರ್ಶನ್ ಬಣ್ಣಿಸಿದರು. ವಿಜಯಪುರ ಪಟ್ಟಣದ ವಿಜಯವಿಶ್ವಕರ್ಮ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಆವರಣದಲ್ಲಿ ಅಮರಶಿಲ್ಪಿ ಜಕಣಾಚಾರಿ ರವರ ಸಂಸ್ಕರಣ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಶೇಖರಾಚಾರಿ ರವರು…

Read More

ಸಾಮಾನ್ಯ ವ್ಯಕ್ತಿಗಳ ಸಾಮಾನ್ಯ ದಿನಚರಿ 2024 ರ ಹೊಸ್ತಿಲಲ್ಲಿ…..

ವಿಜಯ ದರ್ಪಣ ನ್ಯೂಸ್ ಸಾಮಾನ್ಯ ವ್ಯಕ್ತಿಗಳ ಸಾಮಾನ್ಯ ದಿನಚರಿ 2024 ರ ಹೊಸ್ತಿಲಲ್ಲಿ….. ದೇಹ – ಮನಸ್ಸಿನ ಡಯಟ್….. ಬೆಳಗ್ಗೆ ಸುಮಾರು 5 ಗಂಟೆಗೆ ಹಾಸಿಗೆಯಿಂದ ಏಳುವುದು……. ಎದ್ದ ತಕ್ಷಣ ಒಂದು ಲೋಟ ನೀರು ಕುಡಿದು ಕೋಣೆಯೊಳಗೆ ಒಂದು ನಡಿಗೆ‌‌‌‌‌…… ಸುಮಾರು 5/30 ಕ್ಕೆ ಯೋಗ ಪ್ರಾಣಾಯಾಮ ಧ್ಯಾನ ಮಾಡುವುದು…. 6/30/ ರಿಂದ 7 ಸ್ನಾನ ಮಾಡಿ ಸಿದ್ದರಾಗುವುದು….. 7 ರಿಂದ 7/30 ರವರೆಗೆ ಪತ್ರಿಕೆ ಓದುತ್ತಾ ಕಾಫಿ ಅಥವಾ ಟೀ ಅಥವಾ ಹಾಲು ಅಥವಾ ಗ್ರೀನ್…

Read More