ಸಂವಿಧಾನ ಪೀಠಿಕೆ: ಮುಂಗಾಣ್ಕೆಯ ಕನ್ನಡಿ
ವಿಜಯ ದರ್ಪಣ ನ್ಯೂಸ್ ಸಂವಿಧಾನ ಪೀಠಿಕೆ: ಮುಂಗಾಣ್ಕೆಯ ಕನ್ನಡಿ ಭಾರತದ ಸಂವಿಧಾನವು ಒಂದು ಪುಟ್ಟ ಪೀಠಿಕೆಯಿಂದ ಆರಂಭವಾಗುತ್ತದೆ. ಇದು ನಮ್ಮ ಪ್ರಾಚೀನ ಕಾವ್ಯಗಳ ನಾಂದಿ ಪದ್ಯದಂತಿದೆ. ಕಾರಣ, ಅಲ್ಲಿ ಮೊದಲು ಪದ್ಯವು ಇಡೀ ಕಾವ್ಯದ ಆಶಯವನ್ನು ಹೇಳುತ್ತದೆ- ಹನಿ ಇಡೀ ಹೊಳೆಯ ಬಗ್ಗೆ ಹೇಳುವಂತೆ. ಅದರಂತೆ, ಸದರಿ ಪೀಠಿಕೆಯು ಸಂವಿಧಾನದ ಆಶಯವನ್ನು ಮಾತ್ರವಲ್ಲದೆ, ರೂಪುಗೊಳ್ಳಬೇಕಾದ ಭಾರತದ ಪರಿಕಲ್ಪನೆಯನ್ನೇ ಮುಂದಿಡುತ್ತದೆ. ಎಂತಲೇ ಇದನ್ನು ಬಾಬಾಸಾಹೇಬರು ‘ಭಾರತದ ಭವಿಷ್ಯದ ಜೀವನವಿಧಾನದ ಕನ್ನಡಿ’ ಎಂದು ಬಣ್ಣಿಸಿದರು. ಪೀಠಿಕಾ ಪುಟವನ್ನು ಶಾಂತಿನಿಕೇತನದ ಕಲಾವಿದ…