ಸಂಧ್ಯಾರಾಗ: ಜಯಂತಿ ರೈ.

ಸಂಧ್ಯಾರಾಗ ಬದುಕಿನ ಪಯಣದಲ್ಲಿ ಜೀವ ಸಂಕುಲ ವಯಸ್ಸಿನ ಪ್ರಭಾವಕ್ಕೆ ಒಳಗಾಗುವುದು ಸೃಷ್ಟಿಯ ನಿಯಮ. ಹುಟ್ಟು ಸಾವಿನ ಜೀವನ ಚಕ್ರದಲ್ಲಿ ವೃದ್ಧಾಪ್ಯದ ಕಾಲಘಟ್ಟವನ್ನು ದಾಟಿಯೇ ಮುಂದೆ ಸಾಗಬೇಕು. ಮಧ್ಯ ವಯಸ್ಸಿನವರೆಗೂ ಕಾಡದ ಅನೇಕ ಸಮಸ್ಯೆಗಳಾದ ಏಕಾಂಗಿತನ , ಅಭದ್ರತೆ , ಭಯ , ಆಸರೆಯ ಅಗತ್ಯತೆ , ತನ್ನಂತಾನೇ ಹಿರಿಯ ನಾಗರಿಕರಲ್ಲಿ ತಲೆದೋರುತ್ತದೆ. ಮಕ್ಕಳು ಮುಪ್ಪಿನಲ್ಲಿ ಆಧಾರವಾಗುವರೆಂದು ಪ್ರೀತಿಯಿಂದ ಬೆಳೆಸಿ ತಮ್ಮ ಕಷ್ಟಗಳಿಂದ ಮಕ್ಕಳು ನಲುಗಬಾರದೆಂಬ ದೃಷ್ಟಿಯಿಂದ ಬೆಳೆಸಿದ ಅನೇಕ ತಂದೆ ತಾಯಿಗಳಿಗೆ ಮುಪ್ಪಿನಲ್ಲಿ ಸಿಗುವುದಾದರೂ ಏನು? ….

Read More

ಮನಸು ಮನಸುಗಳ ಬೆಸುಗೆಯಲ್ಲಿ ಅಡಗಿದೆ ಇಂದಿನ ಭಾರತದ ಭವಿಷ್ಯ: ಎಸ್.ರಾಜೇಂದ್ರ ಬಾಬು.

ವಿಜಯ ದರ್ಪಣ ನ್ಯೂಸ್.  ಚಿಕ್ಕಬಳ್ಳಾಪುರ ಜಿಲ್ಲೆ. ಆಗಸ್ಟ್ 15  ನಾವು ಈ ದಿನ 77ನೇ ಸ್ವಾತಂತ್ರ್ಯೋತ್ಸವದ  ಸಂಭ್ರಮ ಆಚರಿಸುತ್ತಾ ಇದ್ದೇವೆ. ಸರ್ವ ಧರ್ಮ ಶಾಂತಿಯ ತೋಟ ಎಂದು ನಮ್ಮ ರಾಷ್ಟçಕವಿ ಕುವೆಂಪು ನಮ್ಮ ಭಾರತ ದೇಶವನ್ನು ಬಣ್ಣಿಸಿದ್ದಾರೆ. ಈ ನೆಲದಲ್ಲಿ ಹಿಂದು, ಕ್ರೈಸ್ತ . ಮುಸಲ್ಮಾನ, ಸಿಖ್, ಜೈನ, ಪಾರ್ಸಿ ಹೀಗೆ ವಿವಿಧ ಧರ್ಮದ ಜನರು ತಮ್ಮದೇ ಆಚಾರ ವಿಚಾರಗಳಿಂದ ವಿವಿಧತೆ ತೋರಿದರೂ ನಾವೆಲ್ಲರೂ ಒಂದೇ, ಕುಲವೊಂದೇ, ಮತ ಒಂದೇ. ನಾವು ಮನುಜರು ಎಂಬ ಜಿ.ಎಸ್. ಶಿವರುದ್ರಪ್ಪನವರ…

Read More

ತುಳುನಾಡಿನಲ್ಲಿ ಆಟಿ ಸಂಭ್ರಮ.

ವಿಜಯ ದರ್ಪಣ ನ್ಯೂಸ್, ಮಡಿಕೇರಿ  ಆಟಿ ಸಂಭ್ರಮ ಆಧುನಿಕತೆಯು ತುಳುನಾಡಿನ ಶ್ರೀಮಂತ ಸಂಸ್ಕೃತಿಯನ್ನು ಬದಲಿಸುತಿದೆ. ನಮ್ಮ ಸಂಸ್ಕೃತಿ ಸಂಪ್ರದಾಯ, ಆಚರಣೆಯನ್ನು ಉಳಿಸಿ ಜಾಗೃತಿ ಮೂಡಿಸುವ ಅಗತ್ಯವಿದೆ. ನಮ್ಮ ಪೂರ್ವಜರು ವಿವಿಧ ರೀತಿಯ ಸಂಪ್ರದಾಯಗಳನ್ನು ಪಾಲಿಸುತಿದ್ದರು, ಈ ಸಂಪ್ರದಾಯದ ಹಿಂದೆ ವೈಜ್ಞಾನಿಕ ತಾರ್ಕಿಕತೆ ಕೂಡ ಇದೆ. ತುಳುನಾಡಿನ ಪ್ರಮುಖ ಚಟುವಟಿಕೆ ಕೃಷಿ ಆಧಾರಿತವಾಗಿದೆ ವರ್ಷದ 11ತಿಂಗಳು ಕೃಷಿಯಲ್ಲಿ ತೊಡಗಿಸಿಕೊಳ್ಳುವ ಜನರು ಯಾವಾಗಲೂ ತೋಟ ಗದ್ದೆಗಳಲ್ಲಿ ತಮ್ಮ ಬದುಕು ಕಂಡುಕೊಂಡವರು. ನೇಗಿಲು ಹೊತ್ತು ವರ್ಷವಿಡಿ ಜೊತೆ ನೀಡಿದ ಎತ್ತುಗಳಿಗೆ ಆರಾಮ…

Read More

ದಕ್ಷಿಣ ಭಾರತದ ಗಾನ ಕೋಗಿಲೆಗೆ ಅರವತ್ತರ ಜನ್ಮದಿನದ ಸಂಭ್ರಮ.

ವಿಜಯ ದರ್ಪಣ ನ್ಯೂಸ್  ದಕ್ಷಿಣ ಭಾರತದ ನೈಟಿಂಗೇಲ್ ಗೆ ಅರವತ್ತರ ಜನ್ಮದಿನದ ಸಂಭ್ರಮ. *************************************** ಕೆಲವು ವ್ಯಕ್ತಿಗಳು ಮತ್ತವರ ವ್ಯಕ್ತಿತ್ವವೆಂಬುದು ದೇಶ ಭಾಷೆ, ಜಾತಿ, ಧರ್ಮ …ಎಲ್ಲವನ್ನೂ‌ ಮೀರಿ ನಮ್ಮ ಮನದೊಳಗೆ ಒಂದು ಅಳಿಸಲಾಗದ ಅಭಿಮಾನದ ಹಾಗೂ ಮೆಚ್ಚುಗೆಯ ಮುದ್ರೆಯನ್ನೊತ್ತಿ ಬಿಡುತ್ತದೆ. ಅವರ ಮೇಲಿನ ಅಂತಹಾ ಅಗಾಧವಾದ ಪ್ರೀತಿಗೆ ಕಾರಣವೇ ಬೇಕಿಲ್ಲ. ಅವರನ್ನು ಎಷ್ಟು ಹಚ್ಚಿಕೊಂಡು‌ ಆರಾಧಿಸುತ್ತವೆಂದರೆ ಅವರೂ ಸಹ ನಮ್ಮ‌ ಬದುಕಿನ‌ ಭಾಗವೆಂಬಂತೆ, ಕುಟುಂಬದ ಸದಸ್ಯರೆಂಬಂತಹ ಸಾಮೀಪ್ಯದ ಕಕ್ಕುಲತಿ ಹೃದಯದಲ್ಲಿ ಸರಾಗವಾಗಿ ಸ್ಥಾನ‌ಪಡೆದಿರುತ್ತದೆ. ಅಂತಹ ಅಭಿಮಾನವೆಂಬುದು…

Read More

ಹಾಸ್ಯ ಸಾರ್ವಭೌಮನ ಜನ್ಮ ಶತಮಾನೋತ್ಸವ.

ವಿಜಯ ದರ್ಪಣ ನ್ಯೂಸ್  ಹಾಸ್ಯ ಸಾರ್ವಭೌಮ ನರಸಿಂಹರಾಜು ಜನ್ಮ ಶತಮಾನೋತ್ಸವ. ************************** ನವರಸಗಳ ಅಭಿನಯದಲ್ಲಿ ಆತ್ಯಂತ ಸವಾಲಿನದು ಎಂದರೆ ಅದು ಹಾಸ್ಯರಸದ ಆಭಿವ್ಯಕ್ತಿ ! ಮತ್ತೊಬ್ಬರನ್ನು ನಗಿಸುವ ಕೆಲಸ ಎಂದರೆ ನಾವು ನಕ್ಕಷ್ಟು ಸುಲಭವಲ್ಲ. ನಗಿಸುವುದಕ್ಕೆ ವಿಶೇಷವಾದ ಪ್ರತಿಭೆ ಬೇಕು, ಮಾತುಗಳಲ್ಲಿ ಪಂಚಿಂಗ್ ಹಾಗೂ ಡೈಲಾಗ್ ಡಿಲಿವರಿಯಲ್ಲಿ ಟೈಮಿಂಗ್ಸ್ ಇರಬೇಕು ! ಇವೆಲ್ಲದರ ಜೊತೆಗೆ ಮತ್ತೊಬ್ಬರಿಗೆ ನೋವಾಗದಂತೆ ಹಾಗೂ ಸಭ್ಯತೆಯ ಎಲ್ಲೆ ಮೀರದಂತೆ ನಗಿಸುವುದು ಎಂದರೆ ಅದಕ್ಕೆ ಕಲಾವಿದನಾದವನು ಪರಿಪಕ್ವನಾಗಿರಬೇಕು . ಹಾಸ್ಯಕ್ಕಿರುವ ಮಹತ್ವವನ್ನು ಅರಿತೇ ಬಹುಶಃ…

Read More

ಮಾದಕ ದ್ರವ್ಯ : ಚಕ್ರವ್ಯೂಹದಲ್ಲಿ ಒಳ ಹೊಕ್ಕರೆ ಹೊರ ಬರುವುದು ಅಸಾಧ್ಯ.ಡಾ.ಕೆ.ಬಿ. ಸೂರ್ಯಕುಮಾರ್.

ವಿಜಯ ದರ್ಪಣ ನ್ಯೂಸ್ ಮಡಿಕೇರಿ… ಜೀವನದಲ್ಲಿ ಸುಖ, ದುಃಖ, ನೋವು ನಲಿವು ಸಹಜ. ಗೆದ್ದಾಗ ಬೀಗದೆ, ಸೋತಾಗ ಕುಗ್ಗದೆ ಇರುವವನು ಸ್ಥಿತಪ್ರಜ್ಞ. ಎಂದರೆ ಸ್ಥಿರವಾದ ಬುದ್ದಿಯುಳ್ಳವ, ಶಾಂತಚಿತ್ತತೆಯನ್ನು ಹೊಂದಿರುವವ, ರಾಗ ದ್ವೇಷ ರಹಿತ, ಸುಖ ಹಾಗೂ ದುಃಖಗಳಲ್ಲಿ ವಿಚಲಿತನಾಗದ, ಯಾವಾಗಲೂ ಸಂತೃಪ್ತಿಯನ್ನು ಹೊಂದಿರುವವ ಹಾಗೂ ಆನಂದವನ್ನು ಹೊಂದಿರುವವನು . ಇದು ಎಲ್ಲರಿಗೂ ಸಾಧ್ಯವಿಲ್ಲದ ಮಾತು. ನಮ್ಮ ಕಷ್ಟ ಕಾರ್ಪಣ್ಯಗಳಿಗೆ ಪ್ರತಿಯೊಬ್ಬರೂ ಒಂದೊಂದು ತರಹ ಸ್ಪಂದಿಸುತ್ತಾರೆ. ಕೆಲವು ಭಾವುಕರು ಅತಿಯಾಗಿ ಸ್ಪಂದಿಸುವುದು ನೋವಿಗೆ ಮತ್ತು ದುಃಖಕ್ಕೆ.ಇದರ ಶಮನಕ್ಕೆ ಹೆಚ್ಚಿನವರು…

Read More

ಮಾತಿನಲ್ಲಿ ಹೇಳಲಾರೆನು ರೇಖೆಯಲ್ಲಿ ಗೀಚಲಾರೆನು!!.. ಜಯಶ್ರೀ.ಜೆ.ಅಬ್ಬಿಗೇರಿ

ವಿಜಯ ದರ್ಪಣ ನ್ಯೂಸ್  ಕಾವ್ಯ ಸಂಗಾತಿ ಮಾತಿನಲ್ಲಿ ಹೇಳಲಾರೆನು ರೇಖೆಯಲ್ಲಿ ಗೀಚಲಾರೆನು !! ಜಯಶ್ರೀ.ಜೆ. ಅಬ್ಬಿಗೇರಿ ಹೇ ಕಾವ್ಯ,,,,,,,,,,,,, ನೀನೆಂದರೆ ನನಗೆ ಕೇವಲ ಚೆಂದದ ಚೆಲುವಿಯಲ್ಲ, ಸುಂದರ ಯುವತಿಯಲ್ಲ. ಉಕ್ಕುತ್ತಿರುವ ಹದಿಹರೆಯಕ್ಕೆ ಹರೆಯವನ್ನು ಮತ್ತಷ್ಟು ತುಂಬುವವಳು ಮಾತ್ರವಲ್ಲ, ನನ್ನ ಕರುಳಿಗೆ ಹೊಂದಿಕೊಂಡು ಬೆಳೆದ ಜೀವಂತ ಜೀವಸೆಲೆ. ಇದು ಕರುಳಿನ ಹೃದಯದ ಮಾತು. ಕರುನಾಡ ನೆಲದ ಮಗನಾಗಿ ನಾ ಹೇಳುವುದು ಸತ್ಯ ಅಂತ ನಿನಗೂ ಗೊತ್ತು. ಮನದ ಕುದುರೆ ಲಂಗುಲಗಾಮಿಲ್ಲದೆ ಗೊತ್ತುಗುರಿಯಿಲ್ಲದೇ ಎತ್ತೆತ್ತಲೋ ಓಡುತ್ತಿದೆ. ನಿನ್ನ ಪ್ರೀತಿ, ಹೃನ್ಮನಗಳ…

Read More

ಜೀವ ಹೂವಾಗಿದೆ ಭಾವ ಜೇನಾಗಿದೆ : ಜಯಶ್ರೀ.ಜೆ.ಅಬ್ಬಿಗೇರಿ

ಲಹರಿ ಸಂಗಾತಿ ಜಯಶ್ರೀ.ಜೆ.ಅಬ್ಬಿಗೇರಿ ಜೀವ ಹೂವಾಗಿದೆ ಭಾವ ಜೇನಾಗಿದೆ . ಯ ಮನೋಜ, ಜೀವ ಭಾವ ಎರಡೂ ನಿನ್ನಲ್ಲಿ ಲೀನವಾಗಿ ಹೃದಯ ವೀಣೆ ಹಿತವಾದ ಸಂಗೀತ ಮಿಡಿಯುತಿದೆ. ನನ್ನೆದೆಯ ಮಿಡಿತದ ರಾಗ ನಿನ್ನೆದೆಯ ದನಿಯನ್ನು ಪ್ರತಿಧ್ವನಿಸುತಿದೆ. ಒಲವಿನ ಬಯಕೆಗಳು ನೂರಾರು ಪ್ರೇಮದ ಸವಿಗನಸುಗಳ ಆಗರವನ್ನೇ ಸೃಷ್ಟಿಸಿವೆ. ನಿನ್ನ ಬಿಟ್ಟು ಈ ಜೀವಕೆ ಜೀವದುಸಿರು ಕಲ್ಪಿಸಿಕೊಳ್ಳುವುದು ಅಸಾಧ್ಯವೇ ಸರಿ. ನಿನ್ನ ಕಂಡರೆ ಸಾಕು ಈ ತನು ಮನ ತನ್ನಿಂದ ತಾನೆ ಅರಳುವುವು ಕಣೋ. ನಿನ್ನಾಸರೆ ಒಂದಿದ್ದರೆ ಸಾಕು ಬದುಕೆಲ್ಲ…

Read More

“ಅಕ್ಷರ ರಾಕ್ಷಸ ” ನೆಂದರೆ ಸುಮ್ನೇನಾ….❓ ಹಿರಿಯೂರು ಪ್ರಕಾಶ್

ವಿಜಯ ದರ್ಪಣ                                        ಬೆಂಗಳೂರು ಗ್ರಾ ಜಿಲ್ಲೆ . ಜುಲೈ 04 ” ಅಕ್ಷರ ರಾಕ್ಷಸ ” ನೆಂದರೆ ಸುಮ್ನೇನಾ……? ‘ಪ್ರಾದೇಶಿಕತೆಯೇ ಜೀವಾಳ’ ವೆಂಬ‌ ಟ್ಯಾಗ್ ಲೈನಿನಲ್ಲಿ ಮಿರ ಮಿರ ಮಿಂಚುತ್ತಿರುವ ರಾಜ್ಯದ ಜನಪ್ರಿಯ “ಉದಯಕಾಲ” ದಿನಪತ್ರಿಕೆಯ ಸಂಪಾದಕ ಮಿತ್ರರಾದ ಪುಟ್ಟಲಿಂಗಯ್ಯನವರು ಇತ್ತೀಚೆಗೆ ಕರೆ ಮಾಡಿ ಅದೂ ಇದೂ ಮಾತನಾಡುವ ಸಂಧರ್ಭದಲ್ಲಿ…

Read More

ಇಲ್ಲಿರುವುದು ಸುಮ್ಮನೆ ಅಲ್ಲಿದೆ ನಮ್ಮನೆ ಸುದ್ದಿ ಮನೆ.

 ವಿಜಯ ದರ್ಪಣ ನ್ಯೂಸ್, ಜುಲೈ 01 ಇಲ್ಲಿರುವುದು ಸುಮ್ಮನೆ ಅಲ್ಲಿದೆ ನಮ್ಮನೆ ಸುದ್ದಿ ಮನೆ. ಇಂದಿನ ಸುದ್ದಿ ನಾಳೆಗೆ ರದ್ದಿಯಾಗದಂತೆ ಬರೆವ ಎಲ್ಲ ಪತ್ರಕರ್ತರ ಸ್ಮರಣೆಯಲ್ಲಿ….!!! “ಏ ಬದ್ರಿ ಯಾರ್ಲೆ ಆ ಹುಡುಗ ? ಈಶ್ವರಪ್ಪ ಸರ್ ಕಳಿಸಿರೋ ಹುಡುಗ ಆದ್ರೆ ಒಳಗೆ ಬರೋದಕ್ಕೆ ಹೇಳು…ಹಾ !! ಆಮೇಲೆ ಸುರೇಶನ ಹತ್ರ ಫ್ರಂಟ್ ಪೇಜ್ ಕವರ್ ಸ್ಟೋರಿದು ಪ್ರೂಫ್ ಆಯ್ತಾ ಕೇಳಿ ಕಳ್ಸೋದಕ್ ಹೇಳು ಅರ್ಜೆಂಟು…… ಲೆ ಹುಡ್ಗ ಬಾರ್ಲೆ ಇಲ್ಲಿ” “….” “ಹೂಂ ಕೂತ್ಕೋ” “ಏನ್ಲೆ…

Read More