ಅಕ್ಟೋಬರ್ 16 – ಅನ್ನದ ಋಣ ತೀರಿಸುವ ಒಂದು ಸುವರ್ಣಾವಕಾಶ…..

ವಿಜಯ ದರ್ಪಣ ನ್ಯೂಸ್  ಆಕ್ಟೋಬರ್ 16 – ಅನ್ನದ ಋಣ ತೀರಿಸುವ ಒಂದು ಸುವರ್ಣಾವಕಾಶ….. ಹಸಿವಿನಿಂದ ಪ್ರತಿ ದಿನ‌ ವಿಶ್ವದಲ್ಲಿ 19700 ಜನ ಸಾಯುತ್ತಿದ್ದಾರೆ ಅಂದರೆ ಪ್ರತಿ 4 ಸೆಕೆಂಡಿಗೆ ಒಬ್ಬರು ಎಂದು ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೇರಿರುವ 75 ದೇಶಗಳ 250 ಸಂಘಟನೆಗಳು ವರದಿ ಮಂಡಿಸಿವೆ….. ಅಕ್ಟೋಬರ್ 16 ” ವಿಶ್ವ ಆಹಾರ ದಿನ “….. 1945 ರಲ್ಲಿ ವಿಶ್ವಸಂಸ್ಥೆಯ ” Food and agriculture organization ( FAO ) ಸ್ಥಾಪಿಸಿದ…

Read More

ಪಿ.ಎಂ ಮಣ್ಣೂರ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ

ಪಿ.ಎಂ ಮಣ್ಣೂರ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ ಬೆಂಗಳೂರು:ಹಿರಿಯ ಪತ್ರಕರ್ತ, ಸತ್ಯಕಾಮ ಪತ್ರಿಕೆ ಸಂಪಾದಕ, ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಲಬುರ್ಗಿಯ ಪಿ.ಎಂ.ಮಣ್ಣೂರ (78)ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ) ಸಂತಾಪ ವ್ಯಕ್ತಪಡಿಸುತ್ತದೆ. ಆರು ದಶಕಗಳ ಕಾಲ ಪತ್ರಕರ್ತರಾಗಿದ್ದ ಮಣ್ಣೂರ ಅವರು ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆಯನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸ್ಮರಿಸಿದ್ದಾರೆ. ಪತ್ರಕರ್ತರಾಗಿ 371(ಜೆ) ಹೋರಾಟದಲ್ಲಿ ತೊಡಗಿಸಿಕೊಂಡಿದ್ದನ್ನು KUWJ ಸ್ಮರಿಸಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ…

Read More

ಕೆಯುಡಬ್ಯುಜೆ ವಾರ್ಷಿಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

 ವಿಜಯ ದರ್ಪಣ ನ್ಯೂಸ್ ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) 2022ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳಿಗೆ ಪತ್ರಕರ್ತರಿಂದ ವರದಿ/ಲೇಖನ/ಸುದ್ದಿಛಾಯಾಚಿತ್ರ/ವಿಡಿಯೊ ಕ್ಲಿಪ್ಪಿಂಗ್ ಆಹ್ವಾನಿಸಲಾಗಿದೆ. ಮಾಧ್ಯಮದಲ್ಲಿ ಪ್ರಕಟವಾದ/ಪ್ರಸಾರವಾದ ವರದಿ ಸಹಿತ ಅರ್ಜಿಗಳನ್ನು ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, ಕಂದಾಯ ಭವನ, 3ನೇ ಮಹಡಿ, ಕೆ.ಜಿ.ರೋಡ್, ಬೆಂಗಳೂರು-560009 ಇಲ್ಲಿಗೆ ದಿನಾಂಕ 30.10.2023 ರೊಳಗಾಗಿ ತಲಪುವಂತೆ ಕಳುಹಿಸಲು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಗಳ ವಿವರ: 1. ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ…

Read More

ಸೌಂದರ್ಯ ಸೆಂಟ್ರಲ್ ಶಾಲೆಯಲ್ಲಿ ಯಶಸ್ವಿಯಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ .

ವಿಜಯ ದರ್ಪಣ ನ್ಯೂಸ್ ಬೆಂಗಳೂರು ಅಕ್ಟೋಬರ್ 12 :ಸೌಂದರ್ಯ ಶಿಕ್ಷಣ ಸಂಸ್ಥೆಯ ಉತ್ತರ ಭಾಗದಲ್ಲಿರುವ ಸೌಂದರ್ಯ ಸೆಂಟ್ರಲ್ ಶಾಲೆಯು ದಿನಾಂಕ 9-10-2023 ರಂದು ಸ್ವೀಡಿಷ್ ನಾರ್ಡಿಕ್ ಜಾಝ್ ಬ್ಯಾಂಡ್‌ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಈ ಸುಂದರ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಭರತನಾಟ್ಯ ಪ್ರದರ್ಶನದೊಂದಿಗೆ ಸ್ವಾಗತಿಸಲಾಯಿತು, ಈ ಒಂದು ಸುಮಧುರ ವಾದ್ಯ ಮತ್ತು ಸಂಗೀತದ ರಸದೌತಣವನ್ನು ಉಣಬಡಿಸಲು ಕರ್ನಾಟಕದ ಸಾಕ್ಷ್ಯಚಿತ್ರ ನಿರ್ಮಾಪಕ ಮತ್ತು ದೃಶ್ಯ-ಮಾನವಸಂಪನ್ಮೂಲ ರಾದ  ವಿ.ಶ್ರೀನಿವಾಸ್ ಮೂರ್ತಿ (ಸಿರಿಗಂಧ ಶ್ರೀನಿವಾಸ ಮೂರ್ತಿ) ಉಪಸ್ಥಿತಿಯೊಂದಿಗೆ, ಸ್ವೀಡಿಷ್ ನಾರ್ಡಿಕ್ ಜಾಝ್ ಬ್ಯಾಂಡ್‌ನವರು…

Read More

ಕವಲು ದಾರಿಯಲ್ಲಿ ಕರ್ನಾಟಕದ ಜಾತ್ಯಾತೀತ ಜನತಾದಳ….

ವಿಜಯ ದರ್ಪಣ ನ್ಯೂಸ್ ಅಕ್ಟೋಬರ್ 12 ಕವಲು ದಾರಿಯಲ್ಲಿ ಕರ್ನಾಟಕದ ಜಾತ್ಯಾತೀತ ಜನತಾದಳ……. ತಮಿಳುನಾಡಿನ ಕರುಣಾನಿಧಿ ಕುಟುಂಬ, ಉತ್ತರ ಪ್ರದೇಶದ ಮುಲಯಾಂಸಿಂಗ್ ಕುಟುಂಬ, ಬಿಹಾರದ ಲಾಲೂ ಪ್ರಸಾದ್ ಕುಟುಂಬ, ಒರಿಸ್ಸಾದ ಬಿಜು ಪಾಟ್ನಾಯಕ್ ಕುಟುಂಬ, ಕಾಶ್ಮೀರದ ಷೇಕ್ ಅಬ್ದುಲ್ಲಾ ಕುಟುಂಬ, ಮುಪ್ತಿ ಮಹಮದ್ ಸಯೀದ್ ಕುಟುಂಬ, ಆಂಧ್ರ ಪ್ರದೇಶದ ರಾಜಶೇಖರ್ ರೆಡ್ಡಿ ಕುಟುಂಬ, ಮಹಾರಾಷ್ಟ್ರದ ಬಾಳಾ ಠಾಕ್ರೆ ಕುಟುಂಬ, ಜಾರ್ಖಂಡ್ ನ ಶಿಬು ಸೊರೇನ್ ಕುಟುಂಬ, ಪಂಜಾಬ್ ನ ಪ್ರಕಾಶ್ ಸಿಂಗ್ ಬಾದಲ್ ಕುಟುಂಬ, ಹರಿಯಾಣದ ಚೌಧರಿ…

Read More

ಏಷ್ಯನ್ ಗೇಮ್ಸ್ – ಅದ್ಬುತ ಸಾಧನೆಯಲ್ಲಿ ಭಾರತ……

ವಿಜಯ ದರ್ಪಣ ನ್ಯೂಸ್ ಏಷ್ಯನ್ ಗೇಮ್ಸ್ – ಅದ್ಬುತ ಸಾಧನೆಯಲ್ಲಿ ಭಾರತ…… ತನ್ನದೇ ಅತಿಹೆಚ್ಚು 70 ಪದಕಗಳ ದಾಖಲೆ ಮುರಿದು 107 ಗಳಿಸಿದ ಭಾರತ….. ಆದರೆ ಚೀನಾ ಜಪಾನ್ ಕೊರಿಯಾ ದೇಶಗಳಿಗೆ ಹೋಲಿಸಿದಾಗ ಈಗಲೂ ಕಳಪೆ ಗುಣಮಟ್ಟ ಹೊಂದಿರುವುದು ಸಹ ಅಷ್ಟೇ ಸತ್ಯ…… ಈಗ ಆ ಏರು ಮುಖ ಸಾಧನೆಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಾಗಿರುವ ಜವಾಬ್ದಾರಿ ಸರ್ಕಾರ ಮತ್ತು ಮಕ್ಕಳ ಪೋಷಕರಿಗೆ ಇದೆ…. ಎಲ್ಲಾ ಮಕ್ಕಳೂ ಕ್ರೀಡಾಸಕ್ತರಾಗಿರುವುದಿಲ್ಲ ಅಥವಾ ಕ್ರೀಡಾ ಪ್ರತಿಭೆ ಹೊಂದಿರುವುದಿಲ್ಲ. ಆದರೆ ಕೆಲವು…

Read More

ಫೋರೆನ್ಸಿಕ್ ಸೈನ್ಸ್, ಸಿಸಿಟಿಎನ್‌ಸ್, ಐಸಿಜೆಸ್ ಮತ್ತು ಕಾನೂನು ಸುಧಾರಣೆಗಳು: ಭಾರತದ ನ್ಯಾಯ ವ್ಯವಸ್ಥೆಯಲ್ಲಿ ದೊಡ್ಡ ಮೈಲಿಗಲ್ಲುಗಳು

ವಿಜಯ ದರ್ಪಣ ನ್ಯೂಸ್  ಫೋರೆನ್ಸಿಕ್ ಸೈನ್ಸ್, ಸಿಸಿಟಿಎನ್‌ಸ್, ಐಸಿಜೆಸ್ ಮತ್ತು ಕಾನೂನು ಸುಧಾರಣೆಗಳು: ಭಾರತದ ನ್ಯಾಯ ವ್ಯವಸ್ಥೆಯಲ್ಲಿ ದೊಡ್ಡ ಮೈಲಿಗಲ್ಲುಗಳು 49 ನೇ ಅಖಿಲ ಭಾರತ ಪೊಲೀಸ್ ವಿಜ್ಞಾನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಅಮಿತ್ ಶಾ, “ವಿಧಿ ವಿಜ್ಞಾನ, ಸಿಸಿಟಿಎನ್ಎಸ್ ಮತ್ತು ಐಸಿಜೆಎಸ್ಗಳ ಪಾತ್ರ ಮತ್ತು ಐಪಿಸಿ, ಸಿಆರ್ಪಿಸಿ ಮತ್ತು ಎವಿಡೆನ್ಸ್ ಆಕ್ಟ್ನಲ್ಲಿನ ಬದಲಾವಣೆಗಳು ಆಧುನಿಕ ಯುಗದಲ್ಲಿ ಭಾರತದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತಾಗಿವೆ” ಎಂದರು….

Read More

ಹಿಂಸೆಯ ಪರಾಕಾಷ್ಠೆ,ಇಸ್ರೇಲ್ – ಪ್ಯಾಲೆಸ್ಟೈನ್ – ಸಿರಿಯಾ….

ವಿಜಯ ದರ್ಪಣ ನ್ಯೂಸ್  ಹಿಂಸೆಯ ಪರಾಕಾಷ್ಠೆ,ಇಸ್ರೇಲ್ – ಪ್ಯಾಲೆಸ್ಟೈನ್ – ಸಿರಿಯಾ…. ಮಧ್ಯಕಾಲೀನ ಯುಗದ ಅನಾಗರಿಕ ವ್ಯವಸ್ಥೆಯತ್ತ ಮಧ್ಯಪ್ರಾಚ್ಯ ದೇಶಗಳು ಮತ್ತು ವಿಶ್ವದಲ್ಲಿ ಮತ್ತೆ ಕ್ರೌರ್ಯದ ಅಟ್ಟಹಾಸ….. ಉಕ್ರೇನ್ ರಷ್ಯಾ ಯುದ್ಧ ಮುಂದುವರೆಯುತ್ತಿರುವಾಗಲೇ ನಿರೀಕ್ಷೆಯಂತೆ ಇಸ್ರೇಲ್ ಪ್ಯಾಲೆಸ್ಟೈನ್ ಯುದ್ಧ ಪ್ರಾರಂಭವಾಗಿದೆ.‌ ಜನವರಿ 29 ರಂದು ಬರೆದ ಲೇಖನದ ಊಹೆಗಳು ನಿಜವಾಗುತ್ತಿರುವುದು ತುಂಬಾ ದುಃಖದ ವಿಷಯ…. ಮೃತ ಶರೀರವನ್ನೂ ಅವಮಾನಿಸುವ ಮಾನವನ ಕ್ರೌರ್ಯ ತನ್ನ ಪರಾಕಾಷ್ಠೆಯನ್ನು ತಲುಪಿದೆ. ಒಬ್ಬ ಸೈನಿಕಳನ್ನು ಕೊಂದು ಆ ಶವವನ್ನು ಅರೆ ಬೆತ್ತಲೆ ಮಾಡಿ…

Read More

ಮುಂದಿನ 2 ವರ್ಷಗಳಲ್ಲಿ ಎಡಪಂಥೀಯ ಉಗ್ರವಾದವನ್ನು ಸಂಪೂರ್ಣ ನಿರ್ಮೂಲನೆ ಮಾಡಲಾಗುವುದು: ಅಮಿತ್ ಶಾ ಪ್ರತಿಜ್ಞೆ

ವಿಜಯ ದರ್ಪಣ ನ್ಯೂಸ್  ಎಡಪಂಥೀಯ ಉಗ್ರವಾದವನ್ನು (LWE) ನಿರ್ಮೂಲನೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ರಾಜಧಾನಿಯಲ್ಲಿ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮುಂದಿನ ಎರಡು ವರ್ಷಗಳಲ್ಲಿ ಎಡಪಂಥೀಯ ಉಗ್ರವಾದವನ್ನು ತೊಡೆದುಹಾಕಲು ತ್ವರಿತ ಕ್ರಮವನ್ನು ತೆಗೆದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಎಡಪಂಥೀಯ ಉಗ್ರವಾದವನ್ನು ನಿಗ್ರಹಿಸುವಲ್ಲಿ ಯಶಸ್ಸನ್ನು ಸಾಧಿಸಿದ್ದೇವೆ ಮತ್ತು ಈಗ ಈ ಹೋರಾಟವು ನಿರ್ಣಾಯಕ ಹಂತವನ್ನು ತಲುಪಿದೆ…

Read More

ಒಂದು ಕಾಲೇಜಿಗೆ ಪ್ರವೇಶ, ಇನ್ನೊಂದು ಕಾಲೇಜಿಗೆ ಮರು ಹಂಚಿಕೆ; ವಿದ್ಯಾರ್ಥಿಗಳ ವ್ಯಾಸಂಗವೇ ಅಸಿಂಧು ಆಗಬಹುದು? .

ವಿಜಯ ದರ್ಪಣ ನ್ಯೂಸ್ ಒಂದು ಕಾಲೇಜಿಗೆ ಪ್ರವೇಶ, ಇನ್ನೊಂದು ಕಾಲೇಜಿಗೆ ಮರು ಹಂಚಿಕೆ; ವಿದ್ಯಾರ್ಥಿಗಳ ವ್ಯಾಸಂಗವೇ ಅಸಿಂಧು ಆಗಬಹುದು? ವೈದ್ಯ ವಿದ್ಯಾರ್ಥಿಗಳ ಮರುಹಂಚಿಕೆ: ಮುಂದಿನ ಹಾದಿ ಕಷ್ಟ……  . ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಮರುಹಂಚಿಕೆ: ಯೋಚಿಸಿ ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ CRF ಸಲಹೆ… . ಮೆಡಿಕಲ್ ಕಾಲೇಜು ವಿವಾದ: ಸರ್ಕಾರಗಳ ಕಣ್ಣಾಮುಚ್ಚಾಲೆ ಬಗ್ಗೆ CRF ಅಸಮಾಧಾನ —————–&&&&—————— ಬೆಂಗಳೂರು: ಕಾಲೇಜು ಅನುಮತಿ ವಿಳಂಬ ಕಾರಣಕ್ಕಾಗಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ಮರುಹಂಚಿಕೆ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ…

Read More