📝 ಕಾವ್ಯ ಕನ್ನಡಿಯಲ್ಲಿ ಕಂಡ ರಾಮಚಂದ್ರ 🏹

ವಿಜಯ ದರ್ಪಣ ನ್ಯೂಸ್  📝 ಕಾವ್ಯ ಕನ್ನಡಿಯಲ್ಲಿ ಕಂಡ ರಾಮಚಂದ್ರ 🏹 ಅನಾದಿಕಾಲದಿಂದಲೂ ಮರು ವಿಮರ್ಶೆಗೆ ಮರುವ್ಯಾಖ್ಯಾನಕ್ಕೆ ಒಳಗಾಗುತ್ತಿರುವ ರಾಮನೆಂದರೆ ಯಾರು? ಕಾಲ್ಪನಿಕ ವ್ಯಕ್ತಿಯೇ? ಜೀವೋದ್ಧರಣ ದೈವವೆ? ಸರ್ವಾಂತರ್ಯಾಮಿಯಾದ ಶಕ್ತಿಮೂಲವೆ? ಪೌರಾಣಿಕ ವ್ಯಕ್ತಿಯೇ ಅಥವಾ ಐತಿಹಾಸಿಕ ವ್ಯಕ್ತಿಯೇ? ಪುರಾಣೈತಿಹಾಸಿಕ ಅವತಾರಿಯೇ? ಮೌಖಿಕ ಕಾವ್ಯ ಪರಂಪರೆಯಿಂದ ಮೊದಲ್ಗೊಂಡು ನಂತರ ಶಿಷ್ಟ ಕಾವ್ಯಕ್ಕೆ ಸೀಮಿತನಾದ ಜೀವೋತ್ಕರ್ಷಕಾರಕ ಕಾವ್ಯ ಕಥಾನಾಯಕನೆ? ಮಧ್ಯ ಪ್ರಾಚ್ಯದಿಂದ ಬಂದವರೆಂದು ಹೇಳಲಾದ ಆರ್ಯ ಕುಲ ನಾಯಕನೇ? ಬ್ರಾಹ್ಮಣ್ಯವಾದಿಯೆ? ಸ್ತ್ರೀ ವಿರೋಧಿ ಮನೋಭಾವದ ಪುರುಷ ಪ್ರಧಾನ ವ್ಯವಸ್ಥೆಯ ಪ್ರತಿರೂಪವೇ?…

Read More

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಯಾವುದು ಹೆಚ್ಚು ಅಪಾಯಕಾರಿ……

ವಿಜಯ ದರ್ಪಣ ನ್ಯೂಸ್ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಯಾವುದು ಹೆಚ್ಚು ಅಪಾಯಕಾರಿ…… ಭ್ರಷ್ಟಾಚಾರವೋ, ವಂಶಾಡಳಿತವೋ, ಜಾತಿ ವ್ಯವಸ್ಥೆಯೋ, ಕೋಮು ದ್ರುವೀಕರಣವೋ, ಹಣ ಬಲವೋ, ತೋಳ್ಬಲವೋ, ಭಾಷಾ ಪ್ರಾಬಲ್ಯವೋ, ಜನಾಂಗೀಯ ವಿಭಜನೆಯೋ, ಅಥವಾ ಸರ್ವಾಧಿಕಾರವೋ…… ಮೊದಲನೆಯದಾಗಿ, ಯಾವುದೇ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಸಮಗ್ರ ಚಿಂತನೆಯ ಅವಶ್ಯಕತೆ ಇರುತ್ತದೆ. ಸಂಕುಚಿತ ಮನೋಭಾವ ಯಾವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಬಿಡುವುದಿಲ್ಲ. ಎರಡನೆಯದಾಗಿ, ನಮ್ಮ ಅಂತರ್ಯದಲ್ಲಿ ದ್ವೇಷ ಅಸೂಯೆ ಕೋಪ ಮುಂತಾದ ಭಾವನೆಗಳಿಗಿಂತ ಪ್ರೀತಿ ಸಹನೆ ಕರುಣೆ ಕ್ಷಮಾಗುಣ ರೀತಿಯ ಮನೋಭಾವಗಳು ಹೆಚ್ಚು ಮೇಲುಗೈ…

Read More

ಚುನಾವಣೆ ಘೋಷಣೆಯಾಗಿದೆ……….

ವಿಜಯ ದರ್ಪಣ ನ್ಯೂಸ್  ಚುನಾವಣೆ ಘೋಷಣೆಯಾಗಿದೆ………. ಮುಂದಿನ ಸುಮಾರು 75 ದಿನಗಳು ಸಾಕಷ್ಟು ಕುತೂಹಲ ಮತ್ತು ಸಂಘರ್ಷಮಯ ಸಾಮಾಜಿಕ ರಾಜಕೀಯ ವಾತಾವರಣ ನಿರ್ಮಾಣವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ವ್ಯಕ್ತಿಗಳಾದ ನಾವು ಹೆಚ್ಚು ಜವಾಬ್ದಾರಿಯಿಂದ, ತಾಳ್ಮೆಯಿಂದ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ವೈಯಕ್ತಿಕ ಹಾಗೂ ದೇಶದ ಹಿತಾಸಕ್ತಿಯಿಂದ ಬಹಳ ಮುಖ್ಯ….. ರಾಜಕಾರಣಿಗಳು ಮತ್ತು ಮಾಧ್ಯಮಗಳು ತಮ್ಮ ಸ್ವಾರ್ಥ ಮತ್ತು ವ್ಯಾಪಾರದ ದೃಷ್ಟಿಯಿಂದ ಇಲ್ಲಸಲ್ಲದ ಆರೋಪಗಳನ್ನು, ದ್ವೇಷವನ್ನು, ಅಸೂಯೆಯನ್ನ ಬಹಿರಂಗವಾಗಿ ಪ್ರದರ್ಶಿಸುತ್ತಾ ಜನರನ್ನು ಪ್ರಚೋದಿಸುತ್ತಾರೆ, ಉದ್ರೇಕಿಸುತ್ತಾರೆ. ಆದರೆ ನಾವುಗಳು ಆ ಮುಖವಾಡದ…

Read More

ಮತ್ತೊಂದು ಬೃಹತ್ ರೈತ ಹೋರಾಟಕ್ಕೆ ಸಾಕ್ಷಿಯಾಗುತ್ತಿದೆ ಭಾರತದ ರಾಜಧಾನಿ ದೆಹಲಿ………..

ವಿಜಯ ದರ್ಪಣ ನ್ಯೂಸ್ ಮತ್ತೊಂದು ಬೃಹತ್ ರೈತ ಹೋರಾಟಕ್ಕೆ ಸಾಕ್ಷಿಯಾಗುತ್ತಿದೆ ಭಾರತದ ರಾಜಧಾನಿ ದೆಹಲಿ……….. ಇತಿಹಾಸದಲ್ಲಿ ಅನೇಕ ಏಳು ಬೀಳುಗಳಿಗೆ ಸಾಕ್ಷಿಯಾಗಿರುವ ದೆಹಲಿ ಕೆಲವೇ ತಿಂಗಳುಗಳ ಹಿಂದೆ ಒಂದು ವರ್ಷದ ನಿರಂತರ ಯಶಸ್ವಿ ರೈತ ಹೋರಾಟವನ್ನು ಕಂಡಿದೆ. ಜಾಗತೀಕರಣದ ನಂತರ ಅತಿ ಹೆಚ್ಚು ನಷ್ಟಕ್ಕೆ, ತೊಂದರೆಗೆ ಒಳಗಾಗಿದ್ದು ಭಾರತದ ರೈತ ಸಮೂಹ. ಮುಕ್ತ ಮಾರುಕಟ್ಟೆಗೆ ಬೇಕಾದ ಮಾನಸಿಕ ಸ್ಥಿತಿ ಭಾರತದ ರೈತರಲ್ಲಿ ಇರಲಿಲ್ಲ ಅಥವಾ ಆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲಿನ ರೈತರಿಗೆ, ಈ ನೆಲಕ್ಕೆ ಹೊಂದಾಣಿಕೆ…

Read More

ಪ್ರೀತಿ ಪ್ರೇಮ ಪ್ರಣಯ ಮತ್ತು ನಮ್ಮ ಆತ್ಮಸಾಕ್ಷಿ……

ವಿಜಯ ದರ್ಪಣ ನ್ಯೂಸ್ ಪ್ರೀತಿ ಪ್ರೇಮ ಪ್ರಣಯ ಮತ್ತು ನಮ್ಮ ಆತ್ಮಸಾಕ್ಷಿ…… ಫೆಬ್ರವರಿ 14: ವ್ಯಾಲೆಂಟೈನ್ ಳ ಪ್ರೇಮ ಪತ್ರದ ಉತ್ಕಟ ಪ್ರೀತಿಯ ನವಿರು ಭಾವನೆಗಳು ಉಕ್ಕಿ ಹರಿಯುವ ದಿನದಂದು ಇಲ್ಲೊಬ್ಬ ನತದೃಷ್ಟ ಹೆಣ್ಣಿನ ಬದುಕಿನ ಕಥೆಗೂ ಸ್ವಲ್ಪ ಕಿವಿಗೊಡಿ…… ಪ್ರೀತಿ ಪ್ರೇಮ ಪ್ರಣಯ ಜೀವನದ ಅದ್ಬುತ ಸಾರ ಎಂಬುದು ನಿಜ. ಆದರೆ ಅದು ಕೆಲವರ ಪಾಲಿಗೆ ಮಾರಕವೂ ಆಗಬಹುದು. ನಮ್ಮ ನಡುವಿನ ಹೆಣ್ಣೊಬ್ಬಳ ಅನುಭವ ಆಕೆಯ ಮಾತಿನಲ್ಲಿಯೇ ಕೇಳಿ…. ನಿಮ್ಮೊಳಗೂ ಒಂದು ಸಾಮಾಜಿಕ ಮತ್ತು ನೈತಿಕ…

Read More

ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ನಮ್ಮ ಹೆಮ್ಮೆ…

ವಿಜಯ ದರ್ಪಣ ನ್ಯೂಸ್ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ನಮ್ಮ ಹೆಮ್ಮೆ… ಕರ್ನಾಟಕದಲ್ಲಿ ಹಲವಾರು ಚಿತ್ರ ಶೈಲಿಗಳು ಪರಂಪರೆಯಿಂದ ಬೆಳೆದು ಬಂದಿದೆ. ಅವುಗಳಲ್ಲಿ ಕೆಲವು ಇಂದು ಕಣ್ಮರೆಯಾಗಿವೆ. ಇದಕ್ಕೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳು ಕಾರಣವಿರಬಹುದು. ಇಲ್ಲವೆ, ವ್ಯತಸ್ತ ಮೌಲ್ಯಗಳು, ಬದಲಾದ ಅಭಿರುಚಿ ಕಾರಣವಿರಬಹುದು. ಹೀಗಾಗಿ ಇಂದು, ಆಧುನಿಕ ಕಲಾತ್ಮಕ ಸಂಶೋಧನೆ, ಆವಿಷ್ಕಾರಗಳನ್ನು ಮೈಗೂಡಿಸಿಕೊಳ್ಳಲೂ ಆಗದೆ, ಅತ್ತ ಪರಂಪರೆಯಿಂದ ಬಂದ ಮೂಲಶೈಲಿಯನ್ನು ಬಿಡಲು ಸಾಧ್ಯವಾಗದೆ ಒಂದು ಸಂದಿಗ್ದ ಪರಿಸ್ಥಿತಿ ಸಾಂಪ್ರದಾಯಿಕ ಚಿತ್ರ ಕಲಾವಿದರಿಗೆ ಉಂಟಾಗಿದೆ. ಪರಂಪರಾಗತವಾಗಿ ಬಂದ…

Read More

ದೇವಸ್ಥಾನಗಳ ಪ್ರವೇಶಕ್ಕೆ ವಸ್ತ್ರ ಸಂಹಿತೆ…..

ವಿಜಯ ದರ್ಪಣ ನ್ಯೂಸ್ ದೇವಸ್ಥಾನಗಳ ಪ್ರವೇಶಕ್ಕೆ ವಸ್ತ್ರ ಸಂಹಿತೆ….. ದೇವರಿಗಾಗಿಯೋ, ಮನುಷ್ಯರಿಗಾಗಿಯೋ, ಧರ್ಮಕ್ಕಾಗಿಯೋ, ಪ್ರದರ್ಶನಕ್ಕಾಗಿಯೋ, ರಾಜಕೀಯಕ್ಕಾಗಿಯೋ, ಶಿಸ್ತಿಗಾಗಿಯೋ, ಭಕ್ತಿಗಾಗಿಯೋ, ಸೌಜನ್ಯಕ್ಕಾಗಿಯೋ, ಸಂಪ್ರದಾಯಕ್ಕಾಗಿಯೋ….. ಇದು, ನಾಗರಿಕತೆಯೇ, ಮೌಡ್ಯವೇ, ಸಂಸ್ಕೃತಿಯೇ, ವೈಚಾರಿಕತೆಯೇ, ಆಚರಣೆಯೇ, ಆಶಯವೇ, ಅನವಶ್ಯಕ ಒತ್ತಡವೇ,…. ಇದನ್ನು ಒಪ್ಪಿಕೊಳ್ಳಬೇಕೆ, ತಿರಸ್ಕರಿಸಬೇಕೆ, ನಿರ್ಲಕ್ಷಿಸಬೇಕೆ, ಪ್ರತಿಭಟಿಸಬೇಕೆ,… ಚರ್ಚೆ ಮಾಡುವುದಾದರೆ ಎಲ್ಲವನ್ನೂ ಸಮರ್ಥಿಸಿಕೊಳ್ಳಬಹುದು ಅಥವಾ ವಿರೋಧಿಸಬಹುದು ಅಥವಾ ವ್ಯಂಗ್ಯ ಮಾಡಬಹುದು. ಆದರೆ ವಾಸ್ತವ‌ ಏನಿರಬಹುದು….. ಪ್ರಕೃತಿಯ ಮೂಲದಿಂದ ಯೋಚಿಸಿದಾಗ….. ಮೂಲತಃ ಮನುಷ್ಯ ಬೆತ್ತಲೆ ಜೀವಿ ಎಲ್ಲಾ ಪ್ರಾಣಿ ಪಕ್ಷಿ ಕೀಟಗಳ ರೀತಿಯಲ್ಲಿ. ಆದರೆ…

Read More

ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತಲ್ಲಿ……

ವಿಜಯ ದರ್ಪಣ ನ್ಯೂಸ್ ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತಲ್ಲಿ…… ಆರ್ಥಿಕ ಮೌಲ್ಯಗಳ ಬೆಳವಣಿಗೆ, ಧಾರ್ಮಿಕ ಮೌಲ್ಯಗಳ ವೃದ್ಧಿ, ರಕ್ಷಣಾ ಮೌಲ್ಯಗಳ ಹೆಚ್ಚಳ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆ, ವಿದೇಶಗಳಲ್ಲಿ ಭಾರತದ ಬ್ರಾಂಡ್ ಮೌಲ್ಯ ಏರಿಕೆ,……… ಸಾಮಾಜಿಕ ಸಾಮರಸ್ಯ ಕುಸಿತ, ಪ್ರಜಾಪ್ರಭುತ್ವದ ಮೌಲ್ಯಗಳ ನಾಶ, ಪ್ರಾಕೃತಿಕ ಸಂಪನ್ಮೂಲಗಳ ದುರುಪಯೋಗ, ರಾಜಕೀಯ ಮತ್ತು ಆಡಳಿತದಲ್ಲಿ ಸೇಡಿನ ಮನೋಭಾವ, ಮಾನವೀಯ ಮೌಲ್ಯಗಳ ಸಂಪೂರ್ಣ ಅಧೋಗತಿ…. ನರೇಂದ್ರ ಮೋದಿಯವರನ್ನು ಮೆಚ್ಚುವವರು ಮೇಲಿನ ಅಂಶಗಳಿಗೆ ಮತ್ತಷ್ಟು ಸೇರಿಸಿ ಅವರನ್ನು ಅಭಿವೃದ್ಧಿಯ ಹರಿಕಾರ…

Read More

ಪ್ರೀತಿ ಎಂಬ ಮಾಯಾ ಜಿಂಕೆಯ ಹಿಂದೆ…….

ವಿಜಯ ದರ್ಪಣ ನ್ಯೂಸ್ ಪ್ರೀತಿ……….. ಪ್ರೀತಿ ಎಂಬ ಮಾಯಾ ಜಿಂಕೆಯ ಹಿಂದೆ…….. ಪ್ರೀತಿ ಎಂಬ ಭಾವನೆಗಳ ಆಳಕ್ಕೆ ಅರಿವಿಲ್ಲದೇ ಪ್ರವೇಶಿಸುವ ಯುವಕ ಯುವತಿಯರು ಮತ್ತು ಅದರ ಒಳ ಸುಳಿಗಳ ಹಿಡಿತದಲ್ಲಿ ಅನುಭವಿಸುವ ಯಾತನೆಗಳು…………… ಯಾವುದೋ ಸಂದರ್ಭ, ಸನ್ನಿವೇಶ, ಆಕಸ್ಮಿಕ ಅಥವಾ ಇನ್ನೇನೋ ಕಾರಣದಿಂದ ಪ್ರೇಮಿಗಳು ಪ್ರೀತಿಯ ಆಳಕ್ಕೆ ಇಳಿದು ಬಿಡುತ್ತಾರೆ. ಅದು ಎಷ್ಟು ಆಳವಾಗಿ ಇರುತ್ತದೆಯೆಂದರೆ ಎಷ್ಟೋ ಮುಗ್ಧ ಮನಸ್ಸುಗಳು ಅಲ್ಲಿಂದ ಹೊರ ಬರುವ ದಾರಿಯನ್ನೇ ಗುರುತಿಸಲು ವಿಫಲರಾಗುತ್ತಾರೆ. ಒಂದು ವೇಳೆ ಪ್ರೀತಿಯ ಆಳದಲ್ಲಿ ಅವರಿಗೆ ಒಂದಷ್ಟು…

Read More

ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು……

ವಿಜಯ ದರ್ಪಣ ನ್ಯೂಸ್ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು…… ಸಂಕ್ರಾಂತಿಯ ಸವಿ ನುಡಿಯಿದು….. ವಿಷಯ ಯಾವುದೇ ಇರಲಿ ಕನಿಷ್ಠ ಒಳ್ಳೆಯ ಮಾತನ್ನಾದರು ಆಡಿದರೆ ಎಷ್ಟೋ ಸಮಸ್ಯೆಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ…… ದ್ವೇಷವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ , ಪ್ರೀತಿಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ . ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ , ತಾಳ್ಮೆಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ . ಸ್ವಾರ್ಥವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ , ತ್ಯಾಗವನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ. ಗಲಾಟೆಗಳನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ…

Read More