ಮಾದಕ ದ್ರವ್ಯ : ಚಕ್ರವ್ಯೂಹದಲ್ಲಿ ಒಳ ಹೊಕ್ಕರೆ ಹೊರ ಬರುವುದು ಅಸಾಧ್ಯ.ಡಾ.ಕೆ.ಬಿ. ಸೂರ್ಯಕುಮಾರ್.
ವಿಜಯ ದರ್ಪಣ ನ್ಯೂಸ್ ಮಡಿಕೇರಿ… ಜೀವನದಲ್ಲಿ ಸುಖ, ದುಃಖ, ನೋವು ನಲಿವು ಸಹಜ. ಗೆದ್ದಾಗ ಬೀಗದೆ, ಸೋತಾಗ ಕುಗ್ಗದೆ ಇರುವವನು ಸ್ಥಿತಪ್ರಜ್ಞ. ಎಂದರೆ ಸ್ಥಿರವಾದ ಬುದ್ದಿಯುಳ್ಳವ, ಶಾಂತಚಿತ್ತತೆಯನ್ನು ಹೊಂದಿರುವವ, ರಾಗ ದ್ವೇಷ ರಹಿತ, ಸುಖ ಹಾಗೂ ದುಃಖಗಳಲ್ಲಿ ವಿಚಲಿತನಾಗದ, ಯಾವಾಗಲೂ ಸಂತೃಪ್ತಿಯನ್ನು ಹೊಂದಿರುವವ ಹಾಗೂ ಆನಂದವನ್ನು ಹೊಂದಿರುವವನು . ಇದು ಎಲ್ಲರಿಗೂ ಸಾಧ್ಯವಿಲ್ಲದ ಮಾತು. ನಮ್ಮ ಕಷ್ಟ ಕಾರ್ಪಣ್ಯಗಳಿಗೆ ಪ್ರತಿಯೊಬ್ಬರೂ ಒಂದೊಂದು ತರಹ ಸ್ಪಂದಿಸುತ್ತಾರೆ. ಕೆಲವು ಭಾವುಕರು ಅತಿಯಾಗಿ ಸ್ಪಂದಿಸುವುದು ನೋವಿಗೆ ಮತ್ತು ದುಃಖಕ್ಕೆ.ಇದರ ಶಮನಕ್ಕೆ ಹೆಚ್ಚಿನವರು…