ಪ್ರಹರ್ ಜನಶಕ್ತಿ ಪಕ್ಷ ಪಿ ಜೆ ಪಿ ಕರ್ನಟಕ ರಾಜ್ಯ ಘಟಕ ಕಚೇರಿ ಉದ್ಘಾಟನೆ.

ವಿಜಯ ದರ್ಪಣ ನ್ಯೂಸ್

ಕಲ್ಬುರ್ಗಿ ಜನವರಿ 05:ಪ್ರಹರ್ ಜನಶಕ್ತಿ ಪಕ್ಷ ಪಿ ಜೆ ಪಿ ಕರ್ನಟಕ ರಾಜ್ಯ ಘಟಕ ವತಿಯಿಂದ ಇತ್ತೀಚೆಗೆ ಶುಕ್ರವಾರ ರಾಜ್ಯಧ್ಯಕ್ಷ ಶ್ರೀ ಪ್ರವೀಣ್ ಚೌಧರಿ ಅವರು ಕಲ್ಬುರ್ಗಿ ನಗರ ಜಿಲ್ಲೆಯ ಹೃದಯ ಭಾಗವಾದ ಸೂಪರ್ ಮಾರ್ಕೆಟ್ ಹತ್ತಿರ ನೂತನ ಪಕ್ಷದ ಕಚೇರಿ ಉದ್ಘಾಟನೆ ಮಾಡಿದರು.

ಗುರುಬಸವೇಶ್ವರ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಬಾಬು ಜಗಜೀವನ್ ರಾಮ್ ನವರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು. ಪ್ರಹರ ಜನಶಕ್ತಿ ಪಕ್ಷದ ಉಪಾಧ್ಯಕ್ಷ ವೆಂಕಟೇಶ್ ಜಿ ಶರಣಬಸವ ಹಿರೇಮಠ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಕ್ತಿಯರ್ ಕಾಜಿ ರಾಜ್ಯ ಕಾರ್ಯದರ್ಶಿ ಉದಯ್ ಶಂಕರ್ ಜಿ ಗೌತಮ್ ಕಳೆ ಕಲ್ಬುರ್ಗಿ ಜಿಲ್ಲಾಧ್ಯಕ್ಷ ಗುಡೇಸಾಬ್ ಮುತ್ತುವಳ್ಳಿ ಹಾಗೂ ಅಪಾರ ಬೆಂಬಲಿಗರೊಂದಿಗೆ ಕಾರ್ಯಕರ್ತ ಜೊತೆಯಲ್ಲಿ ಪಾದಯಾತ್ರೆ ಮುಖಾಂತರ ಕಲ್ಬುರ್ಗಿ ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಐವಾನ ಶಾ ಭವನದಲ್ಲಿ ಸಮಾವೇಶಗೊಂಡು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಮುಂಬರುವ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿನ್ನು ಕಣಕ್ಕಿಳಿಸುವಂತೆ ಪಕ್ಷದ ರಾಜ್ಯಾಧ್ಯಕ್ಷರು ಘೋಷಿಸಿದರು ಇದೇ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ರಾಜ್ಯಾಧ್ಯಕ್ಷರನ್ನು ಸನ್ಮಾನಿಸಿದರು.