ಅಹಿಂಸಾತ್ಮಕ ಚಳುವಳಿಯಾಗಿ ಗ್ರಾಮ ಸತ್ಯಾಗ್ರಹವನ್ನು ಮುಂದುವರಿಸಬೇಕಿದೆ: ಜಯದೇವ್
ವಿಜಯ ದರ್ಪಣ ನ್ಯೂಸ್… ಅಹಿಂಸಾತ್ಮಕ ಚಳುವಳಿಯಾಗಿ ಗ್ರಾಮ ಸತ್ಯಾಗ್ರಹವನ್ನು ಮುಂದುವರಿಸಬೇಕಿದೆ: ಜಯದೇವ್ ತಾಂಡವಪುರ ಫೆಬ್ರುವರಿ 14: ಅಹಿಂಸಾತ್ಮಕ ಚಳುವಳಿಯಾಗಿ ಗ್ರಾಮ ಸತ್ಯಾಗ್ರಹವನ್ನು ಮುಂದುವರಿಸಬೇಕಿದೆ ಗಾಂಧಿವಾದಿ ಜಯದೇವ್ ಅಭಿಪ್ರಾಯ ವ್ಯಕ್ತಪಡಿಸಿದರು ಪಟ್ಟರು.ಬದನವಾಳು ಸತ್ಯಾಗ್ರಹದ ಸತ್ಯಾಗ್ರಹಿಗಳ ಸಮಾಲೋಚನಾ ಸಭೆ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ಜರುಗಿತು. ಸಭೆಯಲ್ಲಿ ಗಾಂಧಿವಾದಿಗಳಾದ ಪ್ರಸನ್ನ, ಜಯದೇವ್, ತುಮಕೂರಿನಿಂದ ಯತಿರಾಜ್, ಚಾಮರಾಜನಗರದಿಂದ ವೆಂಕಟರಾಜು, ಪುಣಜೂರು ದೊರೆಸ್ವಾಮಿ, ಎ.ಡಿ. ಸಿಲ್ವಾ, ತಗಡೂರು ಮೋಹನ್, ಬದನವಾಳು ಮಹದೇವಪ್ಪ, ಉಮಾಶಂಕರ್, ಬೆಂಗಳೂರಿನಿಂದ ಪವಿತ್ರ ಮುದ್ದಯ್ಯ, ಗ್ರಾಮ ಸೇವಾ ಸಂಘದಿಂದ ಲಾವಣ್ಯ,…
ವಿಜೃಂಭಣೆಯಿಂದ ಜರುಗಿದ ಗದ್ದೆ ಮಸಣಮ್ಮ ದೇವಿಯ ಪೂಜಾ ಮಹೋತ್ಸವ: ಭಕ್ತರಿಗೆ ಅನ್ನ ಸಂತರ್ಪಣೆ
ವಿಜಯ ದರ್ಪಣ ನ್ಯೂಸ್…. ವಿಜೃಂಭಣೆಯಿಂದ ಜರುಗಿದ ಗದ್ದೆ ಮಸಣಮ್ಮ ದೇವಿಯ ಪೂಜಾ ಮಹೋತ್ಸವ: ಭಕ್ತರಿಗೆ ಅನ್ನ ಸಂತರ್ಪಣೆ ತಾಂಡವಪುರ ಫೆಬ್ರವರಿ 14 ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹದಿನಾರು ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧಿ ಉಳ್ಳ ಗದ್ದೆ ಮಸಣಮ್ಮ ದೇವಿಯ ನಾಲ್ಕನೇ ವರ್ಷದ ಪೂಜಾ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಪ್ರಸಾದ ವಿನಿಯೋಗ ಮಾಡಲಾಯಿತು ಗ್ರಾಮದ ಗದ್ದೆ ಮಸಣಮ್ಮ ದೇವಿಯ ಭಕ್ತ ಮಂಡಳಿಯವರು ಈ ಪೂಜಾ…
ಮೈಸೂರು ಜಿಲ್ಲೆ, ಮೈಸೂರು ನಗರಲ್ಲೆಡೆ ಶಿವರಾತ್ರಿ ಸಂಭ್ರಮದ ಸಿದ್ಧತೆ
ವಿಜಯ ದರ್ಪಣ ನ್ಯೂಸ್…. ಮೈಸೂರು ಜಿಲ್ಲೆ, ಮೈಸೂರು ನಗರಲ್ಲೆಡೆ ಶಿವರಾತ್ರಿ ಸಂಭ್ರಮದ ಸಿದ್ಧತೆ ತಾಂಡವಪುರ ಫೆಬ್ರವರಿ 14 ಮೈಸೂರು ಜಿಲ್ಲೆ ಮತ್ತು ಸಾಂಸ್ಕೃತಿಕ ನಗರಿಯಲ್ಲಿ ತ್ರಿನೇತ್ರೇಶ್ವರ ದೇವಾಲಯ ಹೊರತಾಗಿಯೂ ನಗರದ ಅನೇಕ ಇತಿಹಾಸ ಪ್ರಸಿದ್ಧ ಶಿವನ ದೇವಾಲಯಗಳಲ್ಲಿ ಶಿವರಾತ್ರಿ ಸಂಭ್ರಮಕ್ಕ ಸಜ್ಜಾಗಿವೆ. ರಾಮಾನುಜ ರಸ್ತೆಯಲ್ಲಿನ ಗುರುಕುಲದಲ್ಲಿರುವ ನೂರೊಂದು ಶಿವಲಿಂಗಗಳನ್ನು ಸ್ವಚ್ಛಗೊಳಿಸಿ, ಪೂಜೆಗೆ ಸಜ್ಜು ಮಾಡಲಾಯಿತು. ಇದರ ಮುಂಭಾಗದಲ್ಲಿರುವ ಕಾಮೇಶ್ವರ, ಕಾಮೇಶ್ವರಿ, ಕೆ.ಜಿ.ಕೊಪ್ಪಲು, ಪಡುವಾರಹಳ್ಳಿಯಲ್ಲಿರುವ ಚಂದ್ರಮೌಳೇಶ್ವರ, ಚಾಮುಂಡಿ ಬೆಟ್ಟದ ಮಹಾಬಲೇಶ್ವರಸ್ವಾಮಿ ದೇಗುಲದಲ್ಲೂ ಶಿವರಾತ್ರಿಯ ಆಚರಣೆ ಸಿದ್ದತೆ ನಡೆದವು. ಜಯಲಕ್ಷ್ಮೀಪುರಂನ…
ಎಂ.ಎರ್.ಜಯರಾಮ್ ಭೂ ಕಬಳಿಕೆ ಮಾಡಿದ್ದಾರೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು: ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಗ್ರಾಮಸ್ಥರು ಒತ್ತಾಯ
ವಿಜಯ ದರ್ಪಣ ನ್ಯೂಸ್…. ಎಂ.ಎರ್.ಜಯರಾಮ್ ಭೂ ಕಬಳಿಕೆ ಮಾಡಿದ್ದಾರೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು: ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಗ್ರಾಮಸ್ಥರು ಒತ್ತಾಯ ವಿಜಯಪುರ: ದೇವನಹಳ್ಳಿ ತಾಲೂಕಿನ ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಸುತ್ತಮುತ್ತಲಿನಲ್ಲಿ, ಮಾಜಿ ಶಾಸಕ ಎಂ.ಎರ್.ಜಯರಾಮ್ ಅವರು, ಶಾಸಕರಾಗಿದ್ದಾಗ ಅಧಿಕಾರ ದುರ್ಬಳಕೆ ಮಾಡಿಕೊಂಡು, ಸಾವಿರಾರು ಎಕರೆ ಭೂ ಕಬಳಿಕೆ ಮಾಡಿದ್ದಾರೆ. ರಾಜ್ಯ ಸರಕಾರ, ಭೂಕಬಳಿಕೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಭಾರತ್ ಮುಕ್ತಿ ಮೋರ್ಚಾ, ಬಹುಜನ ಕ್ರಾಂತಿ ಮೋರ್ಚಾ, ರಾಷ್ಟ್ರೀಯ ಕಿಸಾನ್ ಮೋರ್ಚಾ,…
ಯುವಕರು ದಾರಿ ತಪ್ಪದೆ ಶಿಕ್ಷಣದ ಕಡೆಗೆ ಗಮನ ಹರಿಸಬೇಕು : ಸರ್ಕಲ್
ವಿಜಯ ದರ್ಪಣ ನ್ಯೂಸ್…… ಯುವಕರು ದಾರಿ ತಪ್ಪದೆ ಶಿಕ್ಷಣದ ಕಡೆಗೆ ಗಮನ ಹರಿಸಬೇಕು : ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಕುಮಾರ್ ಶಿಡ್ಲಘಟ್ಟ : ಶಿಕ್ಷಣ ಪಡೆದವರು ಸಮಾಜದ ಇತರರಿಗೆ ಮಾದರಿಯಾಗಬೇಕು,ಯುವಕರು ದಾರಿ ತಪ್ಪದೆ ಶಿಕ್ಷಣದ ಕಡೆಗೆ ಗಮನ ಹರಿಸಬೇಕು ಎಂದು ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಕುಮಾರ್ ತಿಳಿಸಿದರು. ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ದಲಿತರ ಕುಂದುಕೊರತೆ ಸಭೆ ಮತ್ತು ಹೆಲ್ಮೆಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಲಿತ ಸಮಯದಾಯದವರು ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಉತ್ತಮ ವಿದ್ಯಾಭ್ಯಾಸ…
ಗುರುಭವನ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಭಿಸಲು ಬಿಇಓ ಗೆ ಶಾಸಕ ರವಿಕುಮಾರ್ ಸೂಚನೆ
ಗುರುಭವನ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಭಿಸಲು ಬಿಇಓ ಗೆ ಶಾಸಕ ರವಿಕುಮಾರ್ ಸೂಚನೆ ಶಿಡ್ಲಘಟ್ಟ : ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಈ ಹಿಂದೆ ಗುರುಭವನ ಕಟ್ಟಡ ನಿರ್ಮಾಣಕ್ಕೆ ತೆಗೆದಿರುವ ಪಾಯದ ಜಾಗವು ಮೈದಾನದ ಮದ್ಯಭಾಗದಲ್ಲಿದ್ದು ಅವೈಜ್ಞಾನಿಕವಾಗಿದ್ದ ಕಾರಣ ಇತರೆ ಶೈಕ್ಷಣಿಕ ಚಟುವಟಿಕೆಗಳಿಗೆ ಅಡಚಣೆ ಆಗಲಿದೆ ,ಹಾಗಾಗಿ ಮೈದಾನದ ಒಂದು ಕಡೆ ಗುರುಭವನ ಕಟ್ಟಡ ನಿರ್ಮಾಣ ಆಗುವುದು ಸೂಕ್ತ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು. ನಗರದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಗುರುಭವನ ಕಟ್ಟಡದ ನಿರ್ಮಾಣಕ್ಕೆ ಅಡಿಪಾಯ ಅಗೆಯುವ ಕೆಲಸ…
ಶಿವರಾತ್ರಿ…….
ವಿಜಯ ದರ್ಪಣ ನ್ಯೂಸ್…. ಶಿವರಾತ್ರಿ……. ಶಿವರಾತ್ರಿಯ ಶಿವ – ರಂಜಾನ್ ಅಲ್ಲಾ – ಕ್ರಿಸ್ಮಸ್ ಯೇಸು ನಾಮ ಸ್ಮರಣೆ….. ಶಿವ ಶಿವ ಶಿವ ಶಿವ…… ( ಎಲ್ಲಾ ಧರ್ಮದ ದೇವರುಗಳ ರೂಪಗಳಿಗೂ ಅನ್ವಯಿಸಿ……..) ನೆನಪಾಗುವೆ ನೀನು ಪ್ರತಿಕ್ಷಣವೂ…….. ಶಿವ ಮುಂಜಾನೆ – ಶಿವ ಮಧ್ಯಾಹ್ನ – ಶಿವ ಸಂಜೆ – ಶಿವರಾತ್ರಿ……. ರೈತನೊಬ್ಬ ಸಾಲದ ಸುಳಿಗೆ ಸಿಲುಕಿ ಉರುಳಿಗೆ ತಲೆಕೊಟ್ಟಾಗ……., ಗೃಹಿಣಿಯೊಬ್ಬಳು ವರದಕ್ಷಿಣೆಯ ಬೆಂಕಿಗೆ ಆಹುತಿಯಾದಾಗ………, ಹಸುಳೆಯೊಂದು ಅತ್ಯಾಚಾರಕ್ಕೆ ಒಳಗಾದಾಗ………, ಜಾತಿ ವ್ಯವಸ್ಥೆಯ ಸುಳಿಗೆ ಸಿಲುಕಿ ಪ್ರೇಮಿಗಳು…
ನಗರೋತ್ಥಾನ ಕಾಮಗಾರಿಗಳು ಶೀಘ್ರ ಪೂರ್ಣಗೊಳಿಸಿ: ಸಚಿವ ರಹೀಂ ಖಾನ್
ವಿಜಯ ದರ್ಪಣ ನ್ಯೂಸ್…. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ ಬರದಂತೆ ಮುಂಜಾಗ್ರತೆ ವಹಿಸಿ ನಗರೋತ್ಥಾನ ಕಾಮಗಾರಿಗಳು ಶೀಘ್ರ ಪೂರ್ಣಗೊಳಿಸಿ: ಸಚಿವ ರಹೀಂ ಖಾನ್ ಬಿಜಿಎಸ್ ನಗರ ದೇವನಹಳ್ಳಿ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ , ಫೆ. 13: ‘ಸರ್ಕಾರದಿಂದ ಬಿಡುಗಡೆಯಾದ ಅನುದಾನ ಆಯಾ ಆರ್ಥಿಕ ವರ್ಷದಲ್ಲೇ ಬಳಕೆ ಮಾಡಬೇಕು ಅಮೃತ್ ನಗರೋತ್ಥಾನ- 04 ರಡಿ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಪೌರಾಡಳಿತ ಹಾಗೂ ಹಜ್ ಇಲಾಖೆ ಸಚಿವರಾದ ರಹೀಂ ಖಾನ್ ಅವರು…
ಮುಖ್ಯಮಂತ್ರಿ ಸಿದ್ದರಾಮಯ್ಯ ರಿಂದ ಯುವಸಮೂಹಕ್ಕೆ ನಿರುದ್ಯೋಗ ಭಾಗ್ಯ : ನಿಸರ್ಗ ಜಗದೀಶ್ ಆರೋಪ
ವಿಜಯ ದರ್ಪಣ ನ್ಯೂಸ್…. ಮುಖ್ಯಮಂತ್ರಿ ಸಿದ್ದರಾಮಯ್ಯ ರಿಂದ ಯುವಸಮೂಹಕ್ಕೆ ನಿರುದ್ಯೋಗ ಭಾಗ್ಯ : ನಿಸರ್ಗ ಜಗದೀಶ್ ಆರೋಪ ಬೆಂಗಳೂರು: ಫೆಬ್ರವರಿ 12: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಸರ್ಕಾರಿ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಯುವಸಮೂಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರುದ್ಯೋಗ ಭಾಗ್ಯ ಕಲ್ಪಿಸಿದ್ದಾರೆ ಎಂದು ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿಸರ್ಗ ಜಗದೀಶ್ ಆರೋಪಿಸಿದರು. ‘ಮೂರು ವರ್ಷಗಳಿಂದ ಸರ್ಕಾರಿ ಇಲಾಖೆಗಳಲ್ಲಿ ನೇಮಕಾತಿ ನಡೆದಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರು 1.32…
ಪರೀಕ್ಷೆಯಲ್ಲಿ ಸಾಧನೆ ಮಾಡುವ ಮೂಲಕ ನಿಮ್ಮ ತಂದೆ ತಾಯಿಗಳ, ಸಮಾಜದ ಮಹತ್ವದ ಆಸ್ತಿ ಆಗಬೇಕು
ವಿಜಯ ದರ್ಪಣ ನ್ಯೂಸ್…. ಪರೀಕ್ಷೆಯಲ್ಲಿ ಸಾಧನೆ ಮಾಡುವ ಮೂಲಕ ನಿಮ್ಮ ತಂದೆ ತಾಯಿಗಳ, ಸಮಾಜದ ಮಹತ್ವದ ಆಸ್ತಿ ಆಗಬೇಕು ಮಾಸ್ತಿ : ಮಾಸ್ತಿಯವರು ತಮ್ಮ ಸಾಹಿತ್ಯ ಸಾಧನೆಯಿಂದ, ಮಾಸ್ತಿ ಕನ್ನಡದ ಆಸ್ತಿಯಾಗಿದ್ದಾರೆ. ಅದೇ ರೀತಿ ನೀವು ಪರೀಕ್ಷೆಯಲ್ಲಿ ಸಾಧನೆ ಮಾಡುವ ಮೂಲಕ ನಿಮ್ಮ ತಂದೆ ತಾಯಿಗಳ, ಸಮಾಜದ ಮಹತ್ವದ ಆಸ್ತಿ ಆಗಬೇಕು ಎಂದು ಶ್ರೀ ನಾರಾಯಣ ಗುರು ಸೇವಾ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಮಾಸ್ತಿ ಟಿ.ಸಿ. ರಮೇಶ್ ನುಡಿದರು. ಮಾಸ್ತಿಯಲ್ಲಿರುವ ಕೆ.ಪಿ.ಎಸ್. ಶಾಲೆಯ ಸುಮಾರು 200ಕ್ಕೂ…
